ಕಾಲ ಚಕ್ರದಲಿ

ಕಾಲ ಚಕ್ರದಲಿ
ಎಲ್ಲವೂ ಕಾಲಾತೀತ|
ಕಾಯಕ, ಕಾರಣ
ಕರ್ಮ ಫಲಗಳೆಲ್ಲವೂ ಕ್ಷಣಿಕ|
ಕಾಲ ಚರಣದಲಿ
ನಾನು ನೀನೆಂಬ ಅಹಂ
ಅಹಂಕಾರಗಳೆಲ್ಲವೂ ಅಣಕ||

ನಿನ್ನೆಯಂತೆ ಈಗಿರುವುದಿಲ್ಲ
ಈಗಿನಂತೆ ನಾಳೆ ಸಿಗುವುದಿಲ್ಲ|
ಇಂದಿನದು ಇಂದಿಗೆ, ನಾಳೆಯದು
ಆ ವಿಧಿಯ ಲೀಲೆ ಕೈಯೊಳಗೆ |
ಏನ ಪಡೆದೆಯೋ ಇಂದು
ಅದು ಮಾತ್ರವೇ ನಿನಗೆ ||

ಬಯಸಿದ ಭಾಗ್ಯಗಳೆಲ್ಲವೂ
ಕೈಗೂಡುವುದಿಲ್ಲ
ಈಗಿರುವ ಸೌಭಾಗ್ಯಗಳೆಲ್ಲವೂ
ಸದಾ ಹೀಗೆಯೆ ಇರಲೂ ಸಾಧ್ಯವಿಲ್ಲ|
ಎಲ್ಲವೂ ಎಲ್ಲರಿಗೂ ಬೇಕು
ಈಗಿರುವ ಹೊಸದು
ಹಳೆಯದಾಗಲೇ ಬೇಕು,
ಇನ್ನಾವುದೋ ಹೊಸದೆನಿಸುತ್ತಿರಬೇಕು|
ಕಾಲ ಕಾಲಗರ್ಭದಲಿ ಎಲ್ಲವೂ ಸೇರಿ
ಗತವೆನಿಸುವ ಸತ್ಯ ತಿಳಿಯಲುಬೇಕು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶುಭಾಶಯ
Next post ಮನಸ್ಸು ಮಾರ್ಗ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys